3 ಡಿ ಸೊಬಗಿನಲ್ಲಿ ?ಆಕ್ರಮಣ?
Posted date: 18 Sun, Nov 2012 ? 05:53:33 PM
ಆಧುನಿಕ ತಂತ್ರಜ್ಞಾನ ನೋಡುಗರಿಗೆ ಹೆಚ್ಚು ಆಪ್ಯಾಯಮಾನವಾಗಿರಲು ಸಹಾಯಕರಿಯಾಗಿದೆ ಎಂಬುದು ಒಪ್ಪತಕ್ಕ ವಿಚಾರ. ಇತ್ತೀಚಿಗೆ 3ಡಿ ಸಿನೆಮಾ ‘ಕಠಾರಿ ವೀರ ಸುರ ಸುಂದರಂಗಿ’ ನೋಡಿದ ಪ್ರೇಕ್ಷಕ ಮಹಾಪ್ರಭುಗಳಿಗೆ ಇದೀಗ ನಿರ್ಮಾಪಕರುಗಳಾದ ಸುರೇಶ್ ಜೈನ್, ನಿರ್ಮಲ್ ಜೈನ್ ಹಾಗೂ ಪ್ರಸನ್ನಕುಮಾರ್ ಜೊತೆಯಾಗಿ ‘ಆಕ್ರಮಣ’ ಕನ್ನಡ ಸಿನೆಮಾ 3 ಡಿ ಹಾಗೂ 2 ಡಿ  ಸೊಬಗಿನಲ್ಲಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 
ಈ ಹಿಂದೆ ಕೆ.ಜಿ. ರತೀಶ್ ಕುಮಾರ್ ಕೇರಳ ರಾಜ್ಯದಲ್ಲಿ ‘ಚೋಟ ಚೇತನ್’ 3ಡಿ ಸಿನೆಮಾದಲ್ಲಿ ಹಾಗೂ ‘ಕಠಾರಿ ವೀರ ಸುರ ಸುಂದರಂಗಿ’ ಚಿತ್ರಕ್ಕೂ ತೊಡಗಿಸಿಕೊಂಡವರು ‘ಆಕ್ರಮಣ’ ಸಿನೆಮಾದ 3 ಡಿ ಛಾಯಾಗ್ರಹಣವನ್ನು ಹಾಗೂ 2 ಡಿ ಛಾಯಾಗ್ರಹಣ ಶಿವಕುಮಾರ್ ಅವರು ಮಾಡಲಿದ್ದಾರೆ. 
‘ಆಕ್ರಮಣ’ ಚಿತ್ರದ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಹಿರಿಯ ನಿರ್ದೇಶಕರುಗಳಾದ ನಾಗಣ್ಣ ಹಾಗೂ ಸುರೇಶ್ ಕೃಷ್ಣ ಅವರ ಬಳಿ ಸಹಾಯಕರಗಿ ದುಡಿದವರು ‘ಏ 1 ಕ್ರಿಯೇಷನ್’ ಬ್ಯಾನರ್ ಇಂದ ಸ್ವತಂತ್ರ ನಿರ್ದೇಶಕರಗುತ್ತಿದ್ದಾರೆ. 
ಅಂದ ಹಾಗೆ ‘ಆಕ್ರಮಣ’ ಚಿತ್ರದ ಮುಹೂರ್ತವು ಕಳೆದ ವಾರ ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕರುಗಳಾದ ಶೈಲೇಂದ್ರ ಬಾಬು ಕ್ಲಾಪ್ ಮಾಡಿದರೆ, ಎಂ ಎಲ್ ಸಿ, ನಿರ್ಮಾಪಕ  ಸಂದೇಶ್ ನಾಗರಾಜ್ ಅವರು ಕೆಮೆರಾ ಚಾಲನೆ ಮಾಡಿದರು. ನಾಯಕ ರಘು ಮುಖರ್ಜಿ ಹಾಗೂ ಡೈಸಿ ಷಾ ಪ್ರಾರ್ಥನೆ ಸಲ್ಲಿಸುವ ದೃಶ್ಯದೊಂದಿಗೆ ಚಿತ್ರೀಕರಣ ಪ್ರಾರಂಭ ಆಯಿತು. 
ಅವಿನಾಷ್, ಶರತ್ ಲೋಹಿತಾಶ್ವ, ಮುನಿ, ಸಿದ್ಲಿಂಗು ಶ್ರೀಧರ್, ಸಂಗೀತ, ಸುಚಿತ್ರಾ, ಸದಾಶಿವ ಬ್ರಹ್ಮವರ್, ಶಿವಾಜಿ ಜಾದವ್, ಪ್ರಕಾಷ್ ಶೇನೊಯ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. 
ಸತೀಶ್ ಆರ್ಯ ಅವರ ಸಂಗೀತ ಈ ಕುತೂಹಲ, ಪ್ರೇಮ, ಭಾವನಾತ್ಮಕ ಅಂಶಗಳನ್ನು ಒಳಗೊಂಡ ಚಿತ್ರಕ್ಕೆ ನೀಡಲಿದ್ದಾರೆ. ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ಮಾಡುವುದಾಗಿ ನಿರ್ದೇಶಕ ಪ್ರಸನ್ನ ಕುಮಾರ್.ಎನ್ ತಿಳಿಸಿದ್ದಾರೆ. 
ಶ್ರೀಮುರಳಿ ‘ಪರಬ್ರಹ್ಮ’ ಸಧ್ಯದಲ್ಲೇ ಆರಂಭ 
ನಾಯಕ ನಟ ಶ್ರೀಮುರಳಿ (ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇ ಗೌಡ ಅವರ ದ್ವಿತೀಯ ಪುತ್ರ) ‘ಪರಬ್ರಹ್ಮ’ ಅವತಾರವನ್ನು ಬೆಳ್ಳಿ ಪರದೆಯ ಮೇಲೆ ತಾಳಲಿದ್ದಾರೆ. ‘ಚಂದ್ರ ಚಕೋರಿ’ ಚಿತ್ರದಿಂದ ಮನೆ ಮಾತಾಗಿ ಇತ್ತೀಚಿನ ‘ಲೂಸುಗಳು.. ಚಿತ್ರಗಳ ವರೆಗೂ ಅನೇಕ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬಂದಿರುವ ಶ್ರೀಮುರಳಿ ಅವರು ‘ಪರಬ್ರಹ್ಮ’ ಚಿತ್ರಕ್ಕೆ ಹಲವು ರೀತಿಯಲ್ಲಿ ತಾಯರಗುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಮತ್ತೊಂದು ತಿರುವು ಈ ಚಿತ್ರ ನೀಡುವುದು ಎಂಬ ಹಂಬಲದ್ಲಲಿ ಅವರು  ಇದ್ದಾರೆ. 
ಏನಿದು ‘ಪರಬ್ರಹ್ಮ’ ಎಂಬ ಕುತೂಹಲ ಸಹಜ. ಇದೊಂದು ಸಾಹಸ ಹಾಗೂ ಸೆಂಟಿಮೆಂಟ್ ಒಳಗೊಂಡಿರುವ ಚಿತ್ರ ಎಂದು ಫ್ರೆಂಡ್ಸ್ ಸಿನೆ ಕ್ರಿಯೇಷನ್ಸ್ ನಿರ್ಮಾಪಕರದ ಸುಂದರ್ ಪಾಟಿಲ್ ಹಾಗೂ ಉದಯ ಚಂದ್ರ ಹೇಳುತ್ತಾರೆ. ಇದೆ ತಿಂಗಳ 22 ರಂದು ಪ್ರಾರಂಭ ಆಗುವ ‘ಪರಬ್ರಹ್ಮ’ ಚಿತ್ರಕ್ಕೆ ಪ್ರಖ್ಯಾತ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯದ ಸಾರಥ್ಯ ಇದೆ. ಕೃಷ್ಣ ಸಾರಥಿ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ರವಿ ವರ್ಮ ಸಾಹಸ ಈ ಚಿತ್ರಕ್ಕೆ ಒದಗಿಸಲಿದ್ದಾರೆ. 
ಶ್ರೀಮುರಳಿ ಅವರಿಗೆ ನಾಯಕಿಯಾಗಿ ‘ಒಲವೇ ಮಂದಾರ’, ‘ಎಧೆಗಾರಿಕೆ’ ಹಾಗೂ ‘ದೇವಿ’ ಚಿತ್ರಗಳ ನಾಯಕಿ ಆಯ್ಕೆ ಆಗಿದ್ದಾರೆ. ಪಾರ್ವತಿ ನಾಯರ್, ಗುರುರಾಜ್ ಹೊಸಕೋಟೇ, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ, ಕಿಲ್ಲರ್ ವೆಂಕಟೇಶ್, ಶೀಲ ಪ್ರಸಾದ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. 
 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed